ಚೌಧರಿಯವರು ಲೋಕಸಭೆಯಲ್ಲಿ ‘ಗಂಧಿ ನಾಲಿ’, ‘ರಾಷ್ಟ್ರೀಯ ಮೀಸೆ’ ಮುಂತಾದ ಚೌಚೌ ಮಾತುಗಳ ರಂಜನೆಯ ಜೊತೆಗೆ, ಸೋನಿಯಾ- ರಾಹುಲ್ ಕುರಿತು ಧೀರತನದ ಸವಾಲೊಂದನ್ನೆಸೆದು ಇಡೀ ದೇಶಕ್ಕೆ ರಂಜನೆ ನೀಡಿದ್ದಾರೆ. ಇತ್ತ ದೇವೇಗೌಡರು, ಸಿದ್ದರಾಮಯ್ಯ ಮೊದಲಾದವರು ಕಾಂಗ್ರೆಸ್ಸನ್ನು ಸಖತ್ತಾಗಿ ಕುಣಿಸುತ್ತಿದ್ದಾರೆ! ಒಟ್ಟಾರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರರಂಜನ ಸಮಿತಿಯಾಗಿಬಿಟ್ಟಿದೆ!