‘ಕೈ’ ಚಳಕಕ್ಕಾಗಿ ಕಾದಿದೆ ಹಡಗು’ ಎಂಬ ಲೇಖನದಲ್ಲಿ (ಪ್ರ.ವಾ., ಏ. 8) ಅರುಣ್ ಸಿನ್ಹಾ ಅವರು ಕಾಂಗ್ರೆಸ್ಸಿಗೆ ಆಗಬೇಕಾದ ಸರ್ಜರಿಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾಯಕರ ಪಡೆ, ಹೋರಾಟಕ್ಕೆ ಬೇಕಾದ ಅಣ್ವಸ್ತ್ರಗಳು ಎಲ್ಲವೂ ಇವೆ. ಇವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಬಿಜೆಪಿ ನಾಯಕರ ಮಾತಿನ ವರಸೆಗೆ ಪಟ್ಟು ಹಾಕುವ ಪಳಗಿದ ನಾಯಕರನ್ನು ಅಖಾಡಕ್ಕೆ ತಂದರೆ, ಕಾಂಗ್ರೆಸ್ ಬಗ್ಗೆ ಜನರಿಗೆ ನಂಬಿಕೆ ಉಂಟಾಗಿ, ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.