ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿರುವುದು ಸೂಕ್ತ ತೀರ್ಮಾನವಲ್ಲ. ಮೃತಪಟ್ಟವರಲ್ಲಿ ಎಷ್ಟೋ ಜನ ಆಯಾ ಕುಟುಂಬಕ್ಕೆ ಆದಾಯದ ಮೂಲಗಳಾಗಿದ್ದರು. ಇಂದು ಕುಟುಂಬಗಳು ಅಂತಹ ವ್ಯಕ್ತಿಗಳನ್ನು ಕಳೆದುಕೊಂಡು ದುಃಖದಲ್ಲಿರುವ ಸಂದರ್ಭದಲ್ಲಿ, ಸರ್ಕಾರ ತನ್ನ ಈ ತೀರ್ಮಾನದಿಂದ ಮತ್ತೆ ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೂರಾರು ಜನರು ಸೂಕ್ತ ಸಮಯಕ್ಕೆ ಆಕ್ಸಿಜನ್, ಹಾಸಿಗೆ, ವೆಂಟಿಲೇಟರ್ಗಳು ಸಿಗದೆ ಸಾವನ್ನಪ್ಪಿದ್ದಾರೆ. ಇವನ್ನು ಸಹಜ ಸಾವುಗಳು ಅನ್ನಲು ಬರುವುದಿಲ್ಲ. ಆರೋಗ್ಯ ಕೇಂದ್ರಗಳಲ್ಲಿನ ಲೋಪದೋಷಗಳಿಂದ ಈ ಸಾವುಗಳು ಸಂಭವಿಸಿರುವುದರಿಂದ ಇದು ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.