‘ಕೊನೆ ನಮಸ್ಕಾರ, ಇರಲಿ ಸಂಸ್ಕಾರ’ ಎಂಬ ವಿಶೇಷ ವರದಿ (ಪ್ರ.ವಾ., ಜುಲೈ 19) ಅತ್ಯಂತ ಸಾಂದಭಿ೯ಕವಾಗಿದೆ. ಕೋವಿಡ್ ರೋಗಿಗಳು ಮೃತಪಟ್ಟಾಗ, ಸೋಂಕು ತಮಗೂ ಹರುಡುತ್ತದೆ ಎಂಬ ಭೀತಿಯಿಂದ ಮೃತರ ಕುಟುಂಬಸ್ಥರು, ಬಂಧು-ಬಳಗದವರು ಅಂತ್ಯಕ್ರಿಯೆಯಿಂದ ದೂರ ಸರಿದು ಅನಾಥಶವಗಳನ್ನಾಗಿ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯ, ಆಚಾರ-ವಿಚಾರ, ಸಂಪ್ರದಾಯ ಎಲ್ಲವೂ ದೂರವಾಗುತ್ತಿರುವುದು ನಿಜಕ್ಕೂ ಅಮಾನವೀಯ.