ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇರಲಿ ಸಂಸ್ಕಾರ’ ಎಂದವರಿಗೆ ನಮಸ್ಕಾರ

ಅಕ್ಷರ ಗಾತ್ರ

‘ಕೊನೆ ನಮಸ್ಕಾರ, ಇರಲಿ ಸಂಸ್ಕಾರ’ ಎಂಬ ವಿಶೇಷ ವರದಿ (ಪ್ರ.ವಾ., ಜುಲೈ 19) ಅತ್ಯಂತ ಸಾಂದಭಿ೯ಕವಾಗಿದೆ. ಕೋವಿಡ್‌ ರೋಗಿಗಳು ಮೃತಪಟ್ಟಾಗ, ಸೋಂಕು ತಮಗೂ ಹರುಡುತ್ತದೆ ಎಂಬ ಭೀತಿಯಿಂದ ಮೃತರ ಕುಟುಂಬಸ್ಥರು, ಬಂಧು-ಬಳಗದವರು ಅಂತ್ಯಕ್ರಿಯೆಯಿಂದ ದೂರ ಸರಿದು ಅನಾಥಶವಗಳನ್ನಾಗಿ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯ, ಆಚಾರ-ವಿಚಾರ, ಸಂಪ್ರದಾಯ ಎಲ್ಲವೂ ದೂರವಾಗುತ್ತಿರುವುದು ನಿಜಕ್ಕೂ ಅಮಾನವೀಯ.

ಇಂತಹ ಸಂದರ್ಭದಲ್ಲಿ, ಕೋವಿಡ್‌ ರೋಗಿಗಳ ಮರಣಾನಂತರ ವೈರಾಣು ಹರಡದು ಎಂಬುದನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟ, ಅವರ ಅಂತ್ಯಕ್ರಿಯೆಗೆ ಯಾವುದೇ ರೀತಿ ಅಡ್ಡಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ವೈದ್ಯರಿಗೆ ಧನ್ಯವಾದಗಳು.

- ಎ.ಜಿ.ಸುರೇಂದ್ರಬಾಬು,ಹೊಳಲ್ಕೆರೆ, ಚಿತ್ರದುಗ೯

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT