ಶ್ರೀಕ್ಷೇತ್ರ ಸಿಗಂದೂರು ದೇವಸ್ಥಾನದ ವತಿಯಿಂದ ಕೆಲವು ಸರ್ಕಾರಿ ಶಾಲೆಗಳು ಸುಣ್ಣ, ಬಣ್ಣದ ಜೊತೆ ಸ್ವಚ್ಛತೆಯಿಂದ ಕಂಗೊಳಿಸುವ ಚಿತ್ರ ನೋಡಿ (ಪ್ರ.ವಾ., ಜ. 11) ಸಂತಸವಾಯಿತು. ದೇವಾಲಯ ಮಂಡಳಿಯ ಈ ಸಾಮಾಜಿಕ ಕಳಕಳಿಯ ಬಗ್ಗೆ ಅಲ್ಲಿನ ಜನರು ಹರ್ಷ ಪಟ್ಟಿದ್ದಾರೆ. ಇಂತಹ ಸಾಮಾಜಿಕ ಸೇವೆಯು ಖಾಸಗಿ ಮಂಡಳಿಯ ಅಧೀನದಲ್ಲಿ ಇರುವ ದೇವಸ್ಥಾನಗಳ ವತಿಯಿಂದ ಆಗಾಗ್ಗೆ ನಡೆಯುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಸರ್ಕಾರದ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಿಂದ ಇಂತಹ ಜನಪರ ಕೆಲಸ ನಡೆಯುವುದನ್ನು ಇದುವರೆಗೂ ನೋಡಿಲ್ಲ ಎಂಬುದು ವಿಪರ್ಯಾಸ.