ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಗೊಂದಲಗಳಿಗೆ ಸಂಬಂಧಿಸಿದಂತೆ ಕನ್ನಡ ಸಂಘಟನೆಗಳಿಗೆ ಜಿಲ್ಲಾಧಿಕಾರಿ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಅಭಿನಂದನೀಯ- ಅನುಕರಣೀಯ. ‘ನನ್ನನ್ನು ಕರೆದಿಲ್ಲ’, ‘ನನಗೆ ತಿಳಿಸಿಲ್ಲ’ ಎಂಬಂಥ ಮಾತುಗಳು ಅಸಮರ್ಥನೀಯ. ಎಲ್ಲರನ್ನೂ ಪ್ರತ್ಯೇಕವಾಗಿ ಆಹ್ವಾನಿಸಲು ಇಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಮಕ್ಕಳ ಮದುವೆ ನಡೆಯುವುದಿಲ್ಲ, ಗೃಹಪ್ರವೇಶದಂಥ ವೈಯಕ್ತಿಕ ಸಮಾ ರಂಭ ಇದಲ್ಲ. ನಾಡು-ನುಡಿಯ ರಕ್ಷಣೆಗಾಗಿ ನಾಡಿಗರೆಲ್ಲ ಒಂದಾಗಿ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭ ಇದು. ಇಲ್ಲಿ ಭಾಗವಹಿಸುವ ಬಹುತೇಕರಿಗೆ ಕನಿಷ್ಠ ಆಹ್ವಾನ ಪತ್ರಿಕೆಯನ್ನೂ ಪರಿಷತ್ತು ರವಾನಿಸಿರುವು ದಿಲ್ಲ. ಆದರೂ ಲಕ್ಷಾಂತರ ಕನ್ನಡ ಮನಸ್ಸುಗಳು ತಮ್ಮದೇ ಮನೆಯ ಕಾರ್ಯಕ್ರಮವೆಂಬಂತೆ ಸಡಗರದಿಂದ ಭಾಗವಹಿಸುವುದಿಲ್ಲವೇ?