‘ಪಾಪ್ ಗಾಯಕಿ ರಿಯಾನಾಗೆ ಭಾರತದ ಕೃಷಿ ಮತ್ತು ಹೊಸ ಕೃಷಿ ಕಾಯ್ದೆಯ ಬಗ್ಗೆ ಏನು ಗೊತ್ತು?’ ಎಂದು ಆಕೆಯನ್ನು ಅನೇಕರು ಗೇಲಿ ಮಾಡಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ರಿಯಾನಾ ಎಂದಾದರೂ ಭತ್ತದ ಗದ್ದೆಯನ್ನು ನೋಡಿದ್ದಾರೆಯೇ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಸತ್ಯೋತ್ತರ ಯುಗದಲ್ಲಿ ಸತ್ಯ ಹೇಗೆ ಅಪ್ರಸ್ತುತವಾಗುತ್ತದೆ ಮತ್ತು ವಿರೂಪಗೊಳ್ಳುತ್ತಾ ಹೋಗುತ್ತದೆ ಎಂಬುದಕ್ಕೆ ಈ ಹೇಳಿಕೆಗಳು ಅತ್ಯುತ್ತಮ ಉದಾಹರಣೆ.