ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಸತ್ಯ, ಆಡಂಬರದ ಮಾತು...

Last Updated 4 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ದೇಶ ಕಟ್ಟುವಿಕೆ ಎಂದರೆ ಇಟ್ಟಿಗೆ, ಸಿಮೆಂಟು ಬಳಸಿ ಸೌಧಗಳನ್ನು ಕಟ್ಟಿದಷ್ಟು ಸುಲಭವಲ್ಲ. ಈ ಪದದ ಒಳಾರ್ಥವನ್ನು ಇಂದಿನ ರಾಜಕೀಯ ಮುಖಂಡರು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ಜನರ ನಂಬಿಕೆ, ವಿಶ್ವಾಸ ದೊರಕಿಸಿಕೊಳ್ಳದ ಹೊರತಾಗಿ ಆ ಕಾರ್ಯ ಸಾಗದು. ಅರ್ಧಸತ್ಯ, ಆಡಂಬರದ ಮಾತುಗಳು ಹಸಿದವನ ಹೊಟ್ಟೆ ತುಂಬಲಾರವು. ನಿರುದ್ಯೋಗಿಗೆ ಉದ್ಯೋಗ ನೀಡಲಾರವು.

ತಮ್ಮಷ್ಟಕ್ಕೆ ತಾವೇ ಟ್ರೆಂಡ್ ಸೃಷ್ಟಿಸಿಕೊಂಡು, ತಮ್ಮ ಪ್ರತೀ ಮಾತನ್ನೂ ಜನ ಒಪ್ಪುತ್ತಾರೆ ಎಂದುಕೊಂಡಿರುವವರು ಅಂತಹ ಮನಃಸ್ಥಿತಿಯಿಂದ ಹೊರಬರುವುದು ಸೂಕ್ತ. ಹಸಿವಿನ ಮುಂದೆ ನೀತಿ ಪಾಠವಾಗಲೀ ಕಥೆಗಳಾಗಲೀ ನಿಲ್ಲವು. ಬೇಕಾಗಿರುವುದು ಅನ್ನ. ಹಾಗೆ ನೋಡಿದರೆ, ಜಗತ್ತಿನಲ್ಲಿ ಕ್ರಾಂತಿಗಳಿಗೆ ಕಾರಣವಾಗಿರುವುದು ಹಸಿವು. ಅದು ಯಾವ ರೂಪದ ಹಸಿವಾದರೂ ಆಗಿರಬಹುದು. ರಾಜಕಾರಣಿಗಳಿಗೆ ಇದರ ಸಂಪೂರ್ಣ ಜ್ಞಾನವಿದ್ದರೆ, ಒಣ ಭಾಷಣ ಮಾಡುವುದನ್ನು ಬಿಟ್ಟು ಜನಮೆಚ್ಚುವ ಕಾರ್ಯ ಮಾಡಲಿ.

ಶ್ವೇತಾ ಎನ್. ಸೊರಬ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT