ತಮ್ಮಷ್ಟಕ್ಕೆ ತಾವೇ ಟ್ರೆಂಡ್ ಸೃಷ್ಟಿಸಿಕೊಂಡು, ತಮ್ಮ ಪ್ರತೀ ಮಾತನ್ನೂ ಜನ ಒಪ್ಪುತ್ತಾರೆ ಎಂದುಕೊಂಡಿರುವವರು ಅಂತಹ ಮನಃಸ್ಥಿತಿಯಿಂದ ಹೊರಬರುವುದು ಸೂಕ್ತ. ಹಸಿವಿನ ಮುಂದೆ ನೀತಿ ಪಾಠವಾಗಲೀ ಕಥೆಗಳಾಗಲೀ ನಿಲ್ಲವು. ಬೇಕಾಗಿರುವುದು ಅನ್ನ. ಹಾಗೆ ನೋಡಿದರೆ, ಜಗತ್ತಿನಲ್ಲಿ ಕ್ರಾಂತಿಗಳಿಗೆ ಕಾರಣವಾಗಿರುವುದು ಹಸಿವು. ಅದು ಯಾವ ರೂಪದ ಹಸಿವಾದರೂ ಆಗಿರಬಹುದು. ರಾಜಕಾರಣಿಗಳಿಗೆ ಇದರ ಸಂಪೂರ್ಣ ಜ್ಞಾನವಿದ್ದರೆ, ಒಣ ಭಾಷಣ ಮಾಡುವುದನ್ನು ಬಿಟ್ಟು ಜನಮೆಚ್ಚುವ ಕಾರ್ಯ ಮಾಡಲಿ.