ದ್ವಿತೀಯ ದರ್ಜೆ ಸಹಾಯಕರಂತಹ ನೇಮಕಾತಿಗೂ ಅಭ್ಯರ್ಥಿಯ ಜನ್ಮದಿನಾಂಕ, ವಿದ್ಯಾರ್ಹತೆ, ಪ್ರಸ್ತುತ ಹುದ್ದೆಯ ನಿರಾಕ್ಷೇಪಣಾ ಪತ್ರ, ಜಾತಿ ಪ್ರಮಾಣಪತ್ರದಂತಹ ಪ್ರತಿಯೊಂದು ಮಾಹಿತಿಯನ್ನೂ ಕೆಪಿಎಸ್ಸಿ ಪಡೆಯುತ್ತದೆ. ಇಂತಹ ಸಾಂವಿಧಾನಿಕ ಸಂಸ್ಥೆಗೆ ಸದಸ್ಯ ಅಥವಾ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಅವರ ಅರ್ಹತೆಯ ಕನಿಷ್ಠ ಮಾಹಿತಿಯನ್ನೂ ಪಡೆಯದೆ ಆಯ್ಕೆ ಮಾಡುವುದು ಸೋಜಿಗ ಮೂಡಿಸುತ್ತದೆ. ಈಗಾಗಲೇ ಭ್ರಷ್ಟಾಚಾರ, ಪಕ್ಷಪಾತ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಹಗರಣಗಳಿಗೆ ಸಂಸ್ಥೆ ಹೆಸರಾಗಿದೆ. ಈಗ ಅದರ ಅಧ್ಯಕ್ಷರ ಅರ್ಹತೆ ಬಗೆಗೇ ಅಪಸ್ವರ ಕೇಳಿಬಂದಿದೆ. ಇನ್ನು ಸ್ಪರ್ಧಾರ್ಥಿಗಳು ಸಂಸ್ಥೆಯನ್ನು ನಂಬುವುದಾದರೂ ಹೇಗೆ?