ಕೇಂದ್ರ ಸರ್ಕಾರವು ಬಹಳ ಆಸ್ಥೆಯಿಂದ ಜಲಜೀವನ್ ಮಿಷನ್ ಹಾಗೂ ಅಟಲ್ ಭೂ– ಜಲ್ ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನವನ್ನೂ ಬಿಡುಗಡೆ ಮಾಡಿದೆ. ಸಾವಿರಾರು ಕೋಟಿ ರೂಪಾಯಿಯ ಈ ಯೋಜನೆಗಳು ಅರ್ಹರಿಗೆ ತಲುಪಿದರೆ ನಿಜಕ್ಕೂ ಅದೊಂದು ಉತ್ತಮ ಸಾಧನೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ ಈ ಯೋಜನೆಗಳ ಸ್ಥಿತಿ. ಯೋಜನೆಗಳಡಿ ಹಣವಿದೆ, ಅದನ್ನು ಖರ್ಚು ಮಾಡಬೇಕೆಂಬ ಒಂದೇ ಉದ್ದೇಶದಿಂದ, ಈಗಾಗಲೇ ನೀರಿನ ಸರಬರಾಜು ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಊರುಗಳ ಕೊಳವೆ ಮಾರ್ಗಕ್ಕೆ (ಪೈಪ್ಲೈನ್) ಪರ್ಯಾಯವಾಗಿ, ಉತ್ತಮವಾಗಿ ಹಾಕಿದ್ದ ಕಾಂಕ್ರೀಟ್ ರಸ್ತೆಗಳನ್ನು ಅಡಿಗಡಿಗೂ ಯಂತ್ರಗಳಿಂದ ಕತ್ತರಿಸಿ ಹಾಳು ಮಾಡಿ ಹೊಸ ಪೈಪ್ಲೈನ್ ಹಾಕಲಾಗುತ್ತಿದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ!