ಈ ವಿಧಿಯನ್ನು ರದ್ದುಗೊಳಿಸುವ ನಿಲುವನ್ನು ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. ಚುನಾವಣೆ ಸಂದರ್ಭ ಮತ ಗಳಿಕೆಗಾಗಿ ರಾಜಕೀಯ ನಾಯಕರು ಇಂತಹ ಹೇಳಿಕೆ ನೀಡುವುದರಿಂದ ಸಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅಭ್ಯರ್ಥಿಗಳು ಅಧಿಕಾರದ ಆಸೆಯೊಂದನ್ನೇ ಇರಿಸಿಕೊಂಡು ಚುನಾವಣೆ ಎದುರಿಸುವುದನ್ನು ಬಿಟ್ಟು ದೇಶದ ಅಭಿವೃದ್ಧಿ ಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲಿ. ದೇಶದ ಏಕತೆಯನ್ನು ಅಪಾಯಕ್ಕೆ ಒಡ್ಡುವ ನಿಲುವುಗಳು ಬೇಡ.