ಪ್ರತೀ ಲೀಟರ್ ಹಾಲಿನ ದರವನ್ನು ₹ 3ರಷ್ಟು ಹೆಚ್ಚಿಸಲು ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ ಸಲ್ಲಿಸಿರುವುದು ಸರಿಯಲ್ಲ. ಬೆಲೆ ಏರಿಕೆಯ ಈ ಕಷ್ಟ ಕಾಲದಲ್ಲಿ ಹಾಲಿನ ದರದಲ್ಲೂ ಹೆಚ್ಚಳವಾದರೆ ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗುತ್ತದೆ. ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಬಾರದು. ರೈತರ ಅನುಕೂಲಕ್ಕಾಗಿ ದರ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಹೇಳುತ್ತಿರುವುದು ನೆಪ ಅಷ್ಟೇ. ಹೆಚ್ಚಳ ಆಗುವ ದರದ ಅಷ್ಟೂ ಮೊತ್ತ ರೈತರಿಗೆ ತಲುಪುವುದಿಲ್ಲ.