ಇಂದು ದಿನಪತ್ರಿಕೆಗಳಲ್ಲಿ, ಭ್ರಷ್ಟರ ವಿಚಾರಗಳೇ ಹೆಚ್ಚು ಪ್ರಕಟವಾಗುತ್ತಾ ಓದುಗರಿಗೆ ಬೇಸರ ತರಿಸುತ್ತಿರುವಾಗ, ಈ ಸಮರ್ಥ ಅಧಿಕಾರಿಯ ಸಾಧನೆ ಓದಿ ಮಹದಾನಂದವಾಯಿತು. ಲಕ್ಷಾಂತರ ಭಕ್ತರು ಸೇರಿದ್ದ ಸ್ಥಳದಲ್ಲಿ ಕುಂದು ಕೊರತೆ ಇಲ್ಲದಂತೆ ಕಾರ್ಯನಿರ್ವಹಿಸಿದ ಅವರ ಕಾರ್ಯತತ್ಪರತೆ ಮತ್ತು ದಕ್ಷತೆಯನ್ನು ಸರ್ಕಾರ ಗುರುತಿಸಿ, ಗೌರವಿಸಬೇಕು.