ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜಾತಿಭಾವನೆಗಳನ್ನು ಜಾಗೃತಗೊಳಿಸಿದ್ದಾರಷ್ಟೇ ಹೊರತು ಮತ್ತೇನಿಲ್ಲ. ಹೌದು, ಈಗ ಈ ಜಾತಿಯಿಂದ ಆಗಬೇಕಾದುದೇನು ಎಂಬುದು ಅರ್ಥವಾಗಲಿಲ್ಲ. ಅಷ್ಟಕ್ಕೂ ಅವರ ಕೃತಿಗಳನ್ನು ಜಾತಿಯ ಮುಖಾಂತರ ಓದುತ್ತ ಬಂದಿದ್ದೇವೆಯೇ? ಹಾಗೆ ನೋಡಿದರೆ ಪಂಪ, ಕುವೆಂಪು ಜಾತಿಯಿಂದ ಬಹುದೂರವಿದ್ದರು. ಭೈರಪ್ಪನವರೂ ಇದಕ್ಕೆ ಹೊರತೇನಲ್ಲ. ಹೀಗಿದ್ದೂ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ, ಜನರ ಮನಸ್ಸನ್ನು ವಿಚಲಿತಗೊಳಿಸುವುದು ಎಷ್ಟು ಸರಿ?