ಬೆಂಗಳೂರು ಕೇಂದ್ರಿತ ನ್ಯಾಯ ವಿತರಣಾ ವ್ಯವಸ್ಥೆ, ಭೌಗೋಳಿಕ ಅಂತರ, ಪ್ರಯಾಣದ ಅವಧಿ, ತಂಗಲು ಉಂಟಾಗುವ ವಿಪರೀತ ಖರ್ಚು ವೆಚ್ಚ ಇತ್ಯಾದಿ ಕಾರಣಗಳಿಂದ ರಾಜ್ಯದ ಹೈಕೋರ್ಟ್ ಪೀಠಗಳನ್ನು ಧಾರವಾಡ ಮತ್ತು ಕಲಬುರ್ಗಿಯಲ್ಲಿ ಸ್ಥಾಪಿಸಲಾಯಿತು. ಇಂತಹ ಜನಪರವಾದ ನಿರ್ಧಾರವನ್ನು ಕೈಗೊಳ್ಳಲು ಹತ್ತಾರು ವರ್ಷಗಳ ಕಾಲ ನಿರಂತರ ಹೋರಾಟವನ್ನು ಉತ್ತರ ಕರ್ನಾಟಕ ಭಾಗದವರು ನಡೆಸಿದರು. ಈಗ, ಸಾರ್ವಜನಿಕ ಒಳಿತನ್ನು ಕಡೆಗಣಿಸಿ ಕಪಟ ರಾಜಕೀಯ ನೀತಿಗಾಗಿ ಲಕ್ಷದ್ವೀಪವನ್ನು ಕರ್ನಾಟಕ ಹೈಕೋರ್ಟ್ ಕ್ಷೇತ್ರ ವ್ಯಾಪ್ತಿಯಲ್ಲಿ ತರಲು ಚಿಂತಿಸಿರುವುದು ಅಲ್ಲಿನ ನಾಗರಿಕರಿಗೆ ಎಸಗುವ ಘೋರ ಅನ್ಯಾಯ. ಇದನ್ನು ನಮ್ಮ ರಾಜ್ಯದ ಪ್ರಜ್ಞಾವಂತ ನಾಗರಿಕರು ಅರಿತು ವಿರೋಧಿಸಬೇಕು.