ದಾನಿಗಳು ನೀಡಿದ ಜಾಗವನ್ನು ಸರ್ಕಾರಿ ಶಾಲೆ ಹೆಸರಿಗೆ ದಾಖಲೀಕರಣ ಮಾಡುವ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುರು ಆಗಿರುವುದು ಹರ್ಷದಾಯಕ ವಿಷಯ. ಹೀಗೇ ಈ ಅಭಿಯಾನವು ಇಡೀ ಕರ್ನಾಟಕದ ತುಂಬೆಲ್ಲಾ ಜಾರಿಯಾದರೆ ಉತ್ತಮ. ಬಹುತೇಕ ಸರ್ಕಾರಿ ಶಾಲೆಗಳಿಗೆ ದಾನ ನೀಡಿದ ಜಾಗ, ಹೊಲ, ಕಣ ಮುಂತಾದ ಭೂಪ್ರದೇಶವನ್ನು ಪಟ್ಟಭದ್ರ ಹಿತಾಸಕ್ತಿಯ ಜನ ದುರುಪಯೋಗ ಮಾಡಿಕೊಂಡಿರುವುದೂ ಇದೆ.ಶಾಲೆಯ ಜಮೀನನ್ನು ಕೃಷಿಗಾಗಿ ಬಳಸಿ ಶಾಲೆಗೆ ಒಂದು ಪೈಸೆಯನ್ನೂ ನೀಡದೆ ಸಂಪೂರ್ಣವಾಗಿ ಫಲವನ್ನು ತಾವೇ ಪಡೆಯುತ್ತಿದ್ದಾರೆ.