ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಕೊನೆಗೂ ಸರ್ಕಾರ ಸ್ವಲ್ಪ ಮಟ್ಟಿಗೆ ಔದಾರ್ಯ ತೋರಿ, ಆಗಸ್ಟ್ವರೆಗೆ ವೇತನ ನೀಡಲು ಒಪ್ಪಿಕೊಂಡಿದೆ. ಆದರೆ ಸಮಸ್ಯೆ ಇಷ್ಟಕ್ಕೇ ಪರಿಹಾರವಾಗುವುದಿಲ್ಲ. ಎಷ್ಟೋ ಮಂದಿ ಅತಿಥಿ ಉಪನ್ಯಾಸಕರು ಕೆಲವು ಕಾಯಂ ಪ್ರಾಧ್ಯಾಪಕರಿಗಿಂತ ಹೆಚ್ಚಿನ ಯೋಗ್ಯತೆ, ವಿದ್ಯಾರ್ಹತೆ, ಸಾಮರ್ಥ್ಯ ಹೊಂದಿದ್ದರೂ ಕನಿಷ್ಠ ವೇತನದೊಂದಿಗೆ ಪ್ರತಿದಿನ ಶೋಷಣೆ, ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಕೆಲವರ ವಯಸ್ಸೂ ಮೀರುತ್ತಿದೆ. ಅಂತಹವರಿಗೆ ಏನಾದರೂ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.