ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪಕ್ಷಿಗೆ ಇರಲಿ ರಕ್ಷಣೆ

ಅಕ್ಷರ ಗಾತ್ರ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬಹುತೇಕ ಹಳ್ಳಿಗಳ ಸುತ್ತಲಿನ ಪರಿಸರದಲ್ಲಿ ರಾಷ್ಟ್ರಪಕ್ಷಿ ನವಿಲಿನ ಸಂಕುಲ ವೃದ್ಧಿಯಾಗಿದೆ. ಆದರೆ ಅವುಗಳಿಗೆ ಸೂಕ್ತವಾದ ರಕ್ಷಣೆ ಮಾತ್ರ ಗಗನಕುಸುಮವಾಗಿದೆ. ಐತಿಹಾಸಿಕ ಸ್ಥಳ ಕಸಬಾ ಲಿಂಗಸುಗೂರು, ಗುರುಗುಂಟೆ ಅಮರೇಶ್ವರ, ಕರಡಕಲ್ಲು... ಹೀಗೆ ಹಲವು ಹಳ್ಳಿಗಳ ಹೊಲಗಳಲ್ಲಿ ಯಥೇಚ್ಛವಾಗಿ ಹಾರಾಡುತ್ತಾ ಸಾಗುವ ಈ ಪಕ್ಷಿಗಳು ಕೆಲವು ಬಾರಿ ಮನುಷ್ಯರು ಹಾಗೂ ಪ್ರಾಣಿಗಳ ಕೈಗೆ ಸಿಲುಕಿ ನಾಶವಾಗುತ್ತಿವೆ. ಹಾಗಾಗಿ ಸರ್ಕಾರ ಈ ಭಾಗದಲ್ಲಿನ ನವಿಲುಗಳ ಸಂರಕ್ಷಣೆಗಾಗಿ ನವಿಲುಧಾಮವನ್ನು ನಿರ್ಮಿಸಬೇಕು.

– ಡಾ. ಶಿವರಾಜ ಯತಗಲ್, ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT