ಸವರ್ಣೀಯರು ಹಾಗೂ ಪರಿಶಿಷ್ಟರ ನಡುವೆ ನಮ್ಮ ಗ್ರಾಮೀಣ ಭಾಗದಲ್ಲಿ ಜಗಳಗಳಾಗುವುದು, ನಂತರ ಇತ್ಯರ್ಥ ಮಾಡಿಕೊಂಡು ಒಂದಾಗುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ ಈ ಊರಿನಲ್ಲಿ ಈ ಜಗಳವು ಮಕ್ಕಳಿಗೆ ಮಿಠಾಯಿ ನಿರಾಕರಿಸುವ ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ದುರಂತ. ಇಂತಹ ನಡೆಗಳು ಆ ಎಳೆಯ ಮನಸ್ಸುಗಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಮಾಜದಲ್ಲಿನ ಇಂತಹ ತಾರತಮ್ಯ ನಿವಾರಣೆಗೆ ಪ್ರಯತ್ನಪಡದೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು, ಕೇವಲ ಕಾನೂನಿನ ಮೂಲಕವೇ ಮತಾಂತರ ತಡೆಯಲು ಹೊರಟಿರುವುದು ಅರ್ಥಹೀನ.