ತಮಿಳುನಾಡಿನ ಕಡಲೂರು ಸಮೀಪದ ಗ್ರಾಮವೊಂದರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕೆ ಅವರನ್ನು ನೆಲದ ಮೇಲೆ ಕೂರಿಸಿ ಸಭೆ ನಡೆಸಲಾಗಿದೆ. ಇದು ಇಡೀ ದೇಶವೇ ತಲೆ ತಗ್ಗಿಸುವಂತಹ ನಾಚಿಕೆಗೇಡಿನ ವಿಚಾರ. ದೇಶ ಎಷ್ಟೇ ಮುಂದುವರಿದು, ಸಾಕ್ಷರತೆಯನ್ನು ಸಾಧಿಸಿದರೂ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡದೇ ಇರದು. ಇಂತಹ ವಿದ್ಯಮಾನಗಳು ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಇವುಗಳಿಗೆ ಅಂತ್ಯ ಇಲ್ಲವೇ?