ಆದರೆ, ಇತ್ತೀಚಿನ ದಿನಗಳಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಿದೆ. ಒಂದೇ ರಾಜಕೀಯ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸುವುದು ಕಷ್ಟ ಎನ್ನುವಂತಾಗಿದೆ. ಪರಿಣಾಮ, ದೇಶದಲ್ಲಿ ‘ಮೈತ್ರಿ ಸರ್ಕಾರ’ಗಳ ಪರ್ವ ಆರಂಭವಾಗಿದೆ. ಚುನಾವಣೆಗೂ ಮುನ್ನ ಹಾವು– ಮುಂಗುಸಿಯಂತೆ ಜಗಳವಾಡಿದವರು, ಫಲಿತಾಂಶದ ಬಳಿಕ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವ ಸ್ಥಿತಿ ಇದೆ. ಇದು ಒಂದು ರೀತಿಯಲ್ಲಿ ‘ಲಿವಿಂಗ್ ಟುಗೆದರ್’ನಂಥ ವ್ಯವಸ್ಥೆ. ಯಾವುದೇ ರಾಜ್ಯದ ಅಭಿವೃದ್ಧಿಗೆ ಇಂಥ ಮೈತ್ರಿಯು ಎಷ್ಟು ಮಾರಕವಾಗಬಲ್ಲದು ಎಂಬುದಕ್ಕೆ ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.