ವಾಚಕರ ವಾಣಿ: ಬೇಕಿತ್ತು ದಂಡ ರದ್ದತಿಯ ‘ಉಡುಗೊರೆ’!
ದೀಪಾವಳಿ ಹಬ್ಬದ ಕಾರಣ, ಅ. 27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸದಂತೆ ಗುಜರಾತ್ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ (ಪ್ರ.ವಾ., ಅ. 23). ನಮ್ಮಲ್ಲಿ ದೀಪಾವಳಿಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿಗಾಗಿ ಬಗೆಬಗೆಯ ಆಶ್ವಾಸನೆ ಹಾಗೂ ಉಡುಗೊರೆಗಳನ್ನು ಕೊಟ್ಟರೆ, ಗುಜರಾತ್ ಸರ್ಕಾರ ಹೊಸ ಬಗೆಯ ‘ಉಡುಗೊರೆ’ ದಯಪಾಲಿಸಿದೆ. ಇದರಿಂದ ಎಷ್ಟೆಲ್ಲ ಅಪಘಾತಗಳು ಉಂಟಾಗುತ್ತವೋ ನಂತರ ಫಲಿತಾಂಶ ತಿಳಿಯುತ್ತದೆ. ಸಂಚಾರ ಉಲ್ಲಂಘನೆಯನ್ನೇ ರೂಢಿ ಮಾಡಿಕೊಂಡಿರುವ ಹಲವಾರು ಮಂದಿಗೆ ಇದೊಂದು ಸುಸಮಯ.
-ಬಾಲಕೃಷ್ಣ ಎಂ.ಆರ್., ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.