‘ದೇಶದಲ್ಲಿ ಕೋವಿಡ್– 19 ಎರಡನೇ ಅಲೆ ಇಷ್ಟೊಂದು ವೇಗವಾಗಿ ಹಬ್ಬಲು ಚುನಾವಣಾ ಆಯೋಗವೇ ಕಾರಣ, ರ್ಯಾಲಿ ಮತ್ತು ಸಭೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವ ಮೂಲಕ ಸೋಂಕು ಹರಡಲು ಆಯೋಗ ಕಾರಣವಾಯಿತು’ ಎಂದು ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿರುವುದು (ಪ್ರ.ವಾ., ಏ. 27) ಒಂದು ರೀತಿಯ ಸಮಾಧಾನ ತಂದಿದೆ. ಚುನಾವಣಾ ಪ್ರಚಾರಕ್ಕೆ ಯಾವ ಅಳುಕಿಲ್ಲದೆ ಅವಕಾಶ ಮಾಡಿಕೊಟ್ಟಿರುವ ಆಯೋಗವು ಆಳುವ ಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿದೆ.