ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಆರೋಗ್ಯ ಕೆಡಿಸುವ ಮಧ್ಯಪ್ರವೇಶ

Last Updated 16 ಜನವರಿ 2020, 18:19 IST
ಅಕ್ಷರ ಗಾತ್ರ

ಸಮಾಜದ ಅಭಿವೃದ್ಧಿಯಲ್ಲಿ ಸ್ವಾಮಿಗಳು ಮತ್ತು ಮಠಗಳ ಪಾತ್ರ ಬಹಳ ಮುಖ್ಯ. ಅವರು ತಾತ್ವಿಕ ಚಿಂತಕರು, ಬೌದ್ಧಿಕವಾಗಿ ಪ್ರಬುದ್ಧರು, ಮಾನವೀಯ ನೆಲೆಯಲ್ಲಿ ಸಮಾಜೋದ್ಧಾರದ ಪ್ರತಿಪಾದಕರು. ಸಮಾಜ ತಪ್ಪು ಹಾದಿಯಲ್ಲಿ ಸಾಗಿದಾಗ ಅವರು ಅದನ್ನು ತಿದ್ದುವ ಪ್ರಯತ್ನ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ರಾಜಕೀಯದ ಸಂಗತಿಗಳಲ್ಲಿ ಸ್ವಾಮಿಗಳು ಅತಿಯಾಗಿ ಮಧ್ಯಪ್ರವೇಶಿಸುತ್ತಿರುವುದು ಸಮಾಜದ ಆರೋಗ್ಯವನ್ನು ಕೆಡಿಸುತ್ತದೆ. ಅವರು ಮುಖ್ಯಮಂತ್ರಿಗೆ ಒಳ್ಳೆಯ ಸಲಹೆ ನೀಡಲಿ ಅಥವಾ ಸಮಾಜದ ಹಿತದೃಷ್ಟಿಯಿಂದ ಬೇಡಿಕೆಗಳು ಇದ್ದರೆ ಅವನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು ಸರಿಪಡಿಸಲು ಪ್ರಯತ್ನಿಸಬಹುದು. ಆದರೆ ‘ನಮ್ಮ ಜಾತಿಗೆ ನೀವು ಋಣಿಯಾಗಬೇಕು, ನಮ್ಮ ಜಾತಿಯವರನ್ನು ಮಂತ್ರಿ ಮಾಡದಿದ್ದರೆ ಇಡೀ ಸಮಾಜ ನಿಮ್ಮನ್ನು ಕೈಬಿಡುತ್ತದೆ’ ಎಂದೆಲ್ಲ ಒತ್ತಡ ಹೇರುವುದು ಎಷ್ಟು ಸರಿ?

-ಡಾ. ಜಿ.ಎಂ.ಮಂಜುನಾಥ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT