ಯಾವುದೇ ಒಂದು ರಾಜಕೀಯ ಪಕ್ಷ, ಚುನಾವಣಾಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಬೇಕು. ಆದರೆ, ನಮ್ಮ ಬಹುಪಾಲು ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಆ ಭರವಸೆಗಳನ್ನು ಮರೆಯುತ್ತವೆ. ಪ್ರಧಾನಿ ನರೇಂದ್ರ ಮೋದಿಯವರೂ ಇದಕ್ಕೆ ಹೊರತಲ್ಲ. ಅವರ ಮಾತಿನ ಧಾಟಿ ನೋಡಿದರೆ ಈ ವಿಷಯದಲ್ಲಿ ಮತದಾರರು ತಮಗೆ ವಿಶೇಷ ರಿಯಾಯಿತಿ ನೀಡಿದ್ದಾರೆ ಎಂದು ಅವರು ಭಾವಿಸಿದಂತಿದೆ.