ಕರ್ನಾಟಕದಲ್ಲಿನ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ಎಂಬುದು ಆಡುನುಡಿಗಷ್ಟೇ ಸೀಮತವಾದಂತೆ ಕಾಣುತ್ತಿದೆ. ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಮೊದಲಿಗೆ ಉಪಚುನಾವಣೆಯು ಅವಶ್ಯಕತೆಯೇ ಇರಲಿಲ್ಲ. ನಾಲ್ಕೋ ಐದೋ ತಿಂಗಳ ಅವಧಿಗೆ ಇಷ್ಟೆಲ್ಲ ಕಸರತ್ತು, ವೆಚ್ಚದ ಅಗತ್ಯ ಇತ್ತೇ ಎಂಬ ಪ್ರಶ್ನೆ ಏಳುತ್ತದೆ.