ಸರ್ಕಾರವು ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಹೀಗಿರುವಾಗ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಯಂತ್ರಗಳನ್ನು ಖರೀದಿಸಲು ತೊಂದರೆಯಾದರೂ ಏನು? ಕಾರ್ಮಿಕರು ಸತ್ತ ನಂತರ ಅವರ ಕುಟುಂಬದವರಿಗೆ ಪಾಲಿಕೆಯವರು ₹ 10ಲಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯವರು ₹ 5 ಲಕ್ಷಪರಿಹಾರ ಕೊಟ್ಟಿದ್ದಾರೆ. ಇದೇ ಹಣದಿಂದ ಮೊದಲೇ ಯಂತ್ರಗಳನ್ನು ಖರೀದಿಸಿದ್ದಿದ್ದರೆ ಕಾರ್ಮಿಕರ ಪ್ರಾಣ ಉಳಿಯುತ್ತಿರಲಿಲ್ಲವೇ?