ಮಠಾಧೀಶರಿಂದ ಜನತಂತ್ರಕ್ಕೆ ಮಾರಕ ಎಂದಿರುವ ಶಾಸಕ ಎಚ್. ವಿಶ್ವನಾಥ್ ‘ನನಗೆ ಅನ್ಯಾಯವಾದಾಗ ಸ್ವಾಮೀಜಿಗಳು ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ (ಪ್ರ.ವಾ. ಜೂನ್ 30). ನಿಜ, ಯಾವ ಮಠದಿಂದಲೂ ಯಾವ ಜನಸಮುದಾಯವೂ ನ್ಯಾಯ ಪಡೆಯಲಾಗುವುದಿಲ್ಲ. ಬದಲಾಗಿ ಸಮಾಜದಲ್ಲಿ ಗುಲಾಮಿ ಮನೋಭಾವ ಮಾರಕವಾಗಿ ಬೆಳೆಯುತ್ತಿದೆ. ಕೆಲವು ಮಠಗಳಂತೂ ಮೂಢ ನಂಬಿಕೆಗಳ ಕಾರ್ಖಾನೆಯಂತೆಯೇ ವರ್ತಿಸುತ್ತಾ ಭಕ್ತರನ್ನು ಸುಲಿಯುತ್ತಿವೆ.