ಸರ್ಕಾರ ತನ್ನ ನೌಕರರಿಗೆ ತಿಂಗಳ ಸಂಬಳ ನೀಡಲು, ನೆರೆ ಸಂತಸ್ತರಿಗೆ ಪರಿಹಾರ ಕಲ್ಪಿಸಲು, ರೈತರಿಗೆ ಬೆಂಬಲ ಬೆಲೆ ಘೋಷಿಸಲು ಪರದಾಡುತ್ತಾ, ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರಿ ಜಮೀನುಗಳನ್ನು ಹರಾಜು ಹಾಕುವ ಮಟ್ಟಿಗಿನ ಒತ್ತಡಕ್ಕೆ ಸಿಲುಕಿದೆ. ಹೀಗಿರುವಾಗ ಮಠಮಾನ್ಯಗಳಿಗೆ ಸರ್ಕಾರವು ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಲು ಹೊರಟಿದೆ (ಪ್ರ.ವಾ., ಸೆ. 2) ಎಂಬುದು ಏನನ್ನು ಸೂಚಿಸುತ್ತದೆ? ಇದರ ಅಗತ್ಯ ಈಗಿದೆಯೇ?