ಸ್ತ್ರೀ ಸಮಾನತೆಗಾಗಿ ಬಸವಣ್ಣ ಕ್ರಾಂತಿಯನ್ನೇ ನಡೆಸಿ, ಇಷ್ಟಲಿಂಗವನ್ನು ಪೂಜಿಸುವ, ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವ ಅಧಿಕಾರವನ್ನು ಮಹಿಳೆಗೂ ನೀಡಿದರು. ಸುಪ್ರೀಂ ಕೋರ್ಟ್ನ ತೀರ್ಪು ಇಂಥದ್ದೇ ಸ್ವಾತಂತ್ರ್ಯವನ್ನು
ಮಹಿಳೆಗೆ ನೀಡಿದೆ. ಹೀಗಿರುವಾಗ ಸ್ತ್ರೀ ವಿರೋಧಿ, ಅನಾಗರಿಕ ಧೋರಣೆಯನ್ನು ಒಡಲಲ್ಲಿಟ್ಟುಕೊಂಡು ಭಾರತ ‘ವಿಶ್ವಗುರು’ ಆಗಬೇಕೆಂದು ಬಯಸುವುದು ಎಷ್ಟರಮಟ್ಟಿಗೆ ಸರಿ?