ಮರಗಿಡ ಹಾಗೂ ಕಾಡಿನ ಸಂರಕ್ಷಣೆ, ಕೆರೆಕುಂಟೆಗಳ ಸರಿಯಾದ ನಿರ್ವಹಣೆ, ಜಲಮೂಲಗಳ ರಕ್ಷಣೆಯಂತಹ ಕೆಲಸಗಳನ್ನು ಸರ್ಕಾರವು ಜವಾಬ್ದಾರಿಯಿಂದ ಮಾಡಿದ್ದಿದ್ದರೆ, ಮೋಡ ಬಿತ್ತನೆ ಅಥವಾ ಮಳೆಗಾಗಿ ಪೂಜೆ, ಪ್ರಾರ್ಥನೆಗೆ ಮೊರೆ ಹೋಗುವ,ಅದಕ್ಕಾಗಿ ಹಣ ಮತ್ತು ಸಮಯವನ್ನು ವ್ಯಯ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ.
ಸರ್ಕಾರ ಮಾತ್ರವಲ್ಲ, ನಾಗರಿಕರೆಲ್ಲರೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬೇಕು. ಮುಂದಿನ ಪೀಳಿಗೆಗೆ ನಾವು ಉಳಿಸಿಹೋಗಬಹುದಾದ ಬಳುವಳಿ ಅದು ಎಂಬ ಭಾವನೆ ನಮ್ಮಲ್ಲಿ ಬರಬೇಕು.