ಭಾರತದಲ್ಲಿ ನೆಹರೂ ವಂಶಾಡಳಿತವನ್ನು, ಕಾಶ್ಮೀರದಲ್ಲಿ ಅಬ್ದುಲ್ಲಾಗಳ ವಂಶಾಡಳಿತವನ್ನು ದಶಕಗಳ ಕಾಲ ಸಹಿಸಿದ್ದೇವೆ. ‘ಕಾಶ್ಮೀರ ಸಿಂಹ’ ಎಂದು ಕರೆಸಿಕೊಳ್ಳುತ್ತಿದ್ದ, ‘ಪ್ರಧಾನಿ’ ಎಂಬ ಬಿರುದಾಂಕಿತ ಶೇಖ್ ಅಬ್ದುಲ್ಲಾ ‘ಸ್ವತಂತ್ರ’ ಕಾಶ್ಮೀರದ ಗರ್ಜನೆ ಮಾಡಿದ್ದರಿಂದ ಅವರ ಖಾಸಾ ಮಿತ್ರ ನೆಹರೂ ಅವರೇ ಅವರನ್ನು ಜೈಲಿಗೆ ತಳ್ಳಿದ್ದರು.
ಈಗ ಅವರ ಮಗ ಫಾರೂಕ್ ಅಬ್ದುಲ್ಲಾ, ಮೊಮ್ಮಗ ಒಮರ್ ಅಬ್ದುಲ್ಲಾ ಭಯೋತ್ಪಾದಕರನ್ನು ‘ಕ್ರಾಂತಿಕಾರಿ’ಗಳೆಂದು ಬಿಂಬಿಸುತ್ತಾ ‘ಸ್ವತಂತ್ರ’ ಕಾಶ್ಮೀರದರಾಗ ತೆಗೆದಿದ್ದಾರೆ. ಅಧಿಕಾರ ಇಲ್ಲದಾಗ ಇವರು ಅಪಸ್ವರ ಹೊರಡಿಸುತ್ತಾರೆ.
–ಪ್ರೊ. ಆರ್.ವಿ. ಹೊರಡಿ, ಧಾರವಾಡ