ರಾಜ್ಯ ಸರ್ಕಾರಗಳು ಮಾಮೂಲಿನಂತೆ 2015–16ನೇ ಸಾಲಿನ ‘ಆಯವ್ಯಯ’ ಮಂಡಿಸುವ ಕಾಲ ಸಮೀಪಿಸುತ್ತಿದೆ. ಪುರಾತನ ಆರ್ಥಿಕ ತಜ್ಞ ಚಾಣಕ್ಯನ ಆಡಳಿತ ನೀತಿಯಂತೆ, ‘Government should tax its people like a bee gets nectar’ ಎಂಬುದನ್ನು ನೆನಪಿಟ್ಟುಕೊಂಡು ತೆರಿಗೆಗಳನ್ನು ಶ್ರೀಸಾಮಾನ್ಯನ ಮೇಲೆ ಹೊರಿಸಲಿವೆಯೇ? ಕಾದು ನೋಡುವ ಕಾಲ ಸನ್ನಿಹಿತವಾಗಿದೆ.
ಸರ್ಕಾರದ ವಿತ್ತೀಯ ಹೊರೆಗಳು ಸುಕೋಮಲ ಪುಷ್ಪದಿಂದ (ಶ್ರೀಸಾಮಾನ್ಯನ) ಜೇನು ನೊಣವು (ಸರ್ಕಾರ) ನೋವಾಗದ ರೀತಿಯಲ್ಲಿ ಹೀರುತ್ತದೆಯೋ ಅಥವಾ ಪುಷ್ಪವನ್ನೇ ಹಿಂಡುತ್ತದೆಯೋ ಕಾದು ನೋಡೋಣ.
– ವಸ್ತಾದ್ ದೂಳಯ್ಯ, ಮಂಡ್ಯ