‘ಇದ್ದ ಮೂವರಲ್ಲಿ ಕಳ್ಳ ಯಾರಿರಬಹುದು’ ಎಂಬುದು ನಿಜಕ್ಕೂ ಕುತೂಹಲದ ಸಂಗತಿಯಾಗಿದೆ. ಸತ್ಯ ಹೊರಬಿದ್ದರೆ, ಮುಂದೆ ಅದುವೇ ಒಂದು ‘ಎಪಿಕ್’ಗೆ (ಮಹಾಕಾವ್ಯ) ವಸ್ತುವಾದೀತು! ಚುನಾವಣೆಯನ್ನು ಕುರುಕ್ಷೇತ್ರ ಮಹಾಯುದ್ಧಕ್ಕೆ ಕೆಲವರು ಹೋಲಿಸಿರುವುದರಿಂದ, ಸದರಿ ‘ಎಪಿಕ್’ ಮತ್ತೊಂದು ‘ಮಹಾಭಾರತ’ದ ಸೃಷ್ಟಿಗೆ ಪ್ರೇರಣೆಯಾಗಬಾರದೇಕೆ?