<p>ಮಾನವ ಬಂಧುತ್ವ ವೇದಿಕೆಯ ಅಡಿಯಲ್ಲಿ ಇದೇ ತಿಂಗಳು 10 ಮತ್ತು 11ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ದಲಿತೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಲಿತರು ಎಂದರೆ ದಮನಕ್ಕೆ ಒಳಗಾದವರು, ಶೋಷಿತರು, ಆರ್ಥಿಕವಾಗಿ ತೀರ ಕೆಳಮಟ್ಟದವರು ಎಂಬ ಅರ್ಥವಿದೆ. ಮತ್ತು ಈ ಅರ್ಥಕ್ಕೆ ಪೂರಕವಾದ ಪ್ರಾಯೋಗಿಕ ಸಾಮಾಜಿಕ ವಿಷಮ ಸ್ಥಿತಿ ಇನ್ನೂ ಜೀವಂತವಿದೆ.<br /> <br /> ಶೋಷಣೆಯಿಂದ ನರಳುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ವಿವೇಚನೆ- ಅಧ್ಯಯನದ ಬಗ್ಗೆ ಗೊತ್ತು. ಆದರೆ, ಇಂಥವರ ಬದುಕಿನ ಉತ್ಸವ ಎಂದರೇನು? ಇದು ನನ್ನಲ್ಲಿ ಗೊಂದಲ ಮೂಡಿಸಿದೆ.<br /> <br /> ತುಳಿತಕ್ಕೊಳಗಾದ ಈ ಸಮುದಾಯವನ್ನು ಸಾಮಾಜಿಕವಾಗಿ ಮೇಲಕ್ಕೆತ್ತಲು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಈ ಮೀಸಲಾತಿ ಇಲ್ಲಿಗೆ ಸಾಕು ಎನ್ನುವ ಧಾಟಿಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ಸರ್ಕಾರಗಳು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕುವವರೆಗೂ ಮೀಸಲಾತಿಯನ್ನು ಮುಂದುವರೆಸಲಾಗುವುದು ಎಂದು ಸಮರ್ಥಿಸಿಕೊಳ್ಳುತ್ತಿವೆ.<br /> <br /> ಅಂದರೆ, ದಲಿತ ಸಮುದಾಯ ಕಣ್ಣೀರಿನಲ್ಲಿ ಕೈತೊಳೆಯುತ್ತ, ವೇದನೆಯಲ್ಲಿದೆ ಎಂದರ್ಥ. ಹೀಗಿರುವಾಗ, ದಲಿತೋತ್ಸವ ಎಂದರೆ, ದಲಿತರ ಬದುಕಿನ ಈ ಎಲ್ಲ ದುರಂತಗಳ ಸಂಭ್ರಮದ ಉತ್ಸವ ಎಂಬ ಅರ್ಥ ನನ್ನ ಅನುಭವದ ಮಿತಿಗೆ ಎದುರಾಗುತ್ತಿದೆ. ಹೀಗಾಗಿ ದಲಿತೋತ್ಸವ ಎಂದರೆ, ಯಾರ ಉತ್ಸವ? ದಲಿತರ ಯಾವುದರ ಉತ್ಸವ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನವ ಬಂಧುತ್ವ ವೇದಿಕೆಯ ಅಡಿಯಲ್ಲಿ ಇದೇ ತಿಂಗಳು 10 ಮತ್ತು 11ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ದಲಿತೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಲಿತರು ಎಂದರೆ ದಮನಕ್ಕೆ ಒಳಗಾದವರು, ಶೋಷಿತರು, ಆರ್ಥಿಕವಾಗಿ ತೀರ ಕೆಳಮಟ್ಟದವರು ಎಂಬ ಅರ್ಥವಿದೆ. ಮತ್ತು ಈ ಅರ್ಥಕ್ಕೆ ಪೂರಕವಾದ ಪ್ರಾಯೋಗಿಕ ಸಾಮಾಜಿಕ ವಿಷಮ ಸ್ಥಿತಿ ಇನ್ನೂ ಜೀವಂತವಿದೆ.<br /> <br /> ಶೋಷಣೆಯಿಂದ ನರಳುತ್ತಿರುವ ಈ ಸಮುದಾಯದ ಸಾಂಸ್ಕೃತಿಕ ವಿವೇಚನೆ- ಅಧ್ಯಯನದ ಬಗ್ಗೆ ಗೊತ್ತು. ಆದರೆ, ಇಂಥವರ ಬದುಕಿನ ಉತ್ಸವ ಎಂದರೇನು? ಇದು ನನ್ನಲ್ಲಿ ಗೊಂದಲ ಮೂಡಿಸಿದೆ.<br /> <br /> ತುಳಿತಕ್ಕೊಳಗಾದ ಈ ಸಮುದಾಯವನ್ನು ಸಾಮಾಜಿಕವಾಗಿ ಮೇಲಕ್ಕೆತ್ತಲು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಈ ಮೀಸಲಾತಿ ಇಲ್ಲಿಗೆ ಸಾಕು ಎನ್ನುವ ಧಾಟಿಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ಸರ್ಕಾರಗಳು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕುವವರೆಗೂ ಮೀಸಲಾತಿಯನ್ನು ಮುಂದುವರೆಸಲಾಗುವುದು ಎಂದು ಸಮರ್ಥಿಸಿಕೊಳ್ಳುತ್ತಿವೆ.<br /> <br /> ಅಂದರೆ, ದಲಿತ ಸಮುದಾಯ ಕಣ್ಣೀರಿನಲ್ಲಿ ಕೈತೊಳೆಯುತ್ತ, ವೇದನೆಯಲ್ಲಿದೆ ಎಂದರ್ಥ. ಹೀಗಿರುವಾಗ, ದಲಿತೋತ್ಸವ ಎಂದರೆ, ದಲಿತರ ಬದುಕಿನ ಈ ಎಲ್ಲ ದುರಂತಗಳ ಸಂಭ್ರಮದ ಉತ್ಸವ ಎಂಬ ಅರ್ಥ ನನ್ನ ಅನುಭವದ ಮಿತಿಗೆ ಎದುರಾಗುತ್ತಿದೆ. ಹೀಗಾಗಿ ದಲಿತೋತ್ಸವ ಎಂದರೆ, ಯಾರ ಉತ್ಸವ? ದಲಿತರ ಯಾವುದರ ಉತ್ಸವ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>