ಗಣಪತಿ ಮೂರ್ತಿಯನ್ನು ಮುಳುಗಿಸಲು ಮಾಡಲಾಗಿರುವ ತಾತ್ಕಾಲಿಕ ಟ್ಯಾಂಕ್ ಹಾಗೂ ಅರ್ಧ ಕರಗಿರುವ ಗಣಪನ ಮೂರ್ತಿಗಳನ್ನು ರಾತ್ರಿ ವೇಳೆ ತಂದು ರಸ್ತೆ ಬದಿಯಲ್ಲಿ ಇಟ್ಟು ಹೋಗುತ್ತಿದ್ದಾರೆ.
ನಗರದ ಪೀಣ್ಯ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿರುವ ಇಎಸ್ಐ ಪೀಣ್ಯ ಒನ್ ಶಾಖೆಯ ಎಸ್ಆರ್ಎಸ್ ರಸ್ತೆ (ಕೆಐಎಡಿಬಿ ಹೌಸಿಂಗ್ ಕಾಲೋನಿ ಪಕ್ಕದ ರಸ್ತೆಯಲ್ಲಿ) ಬಳಿ ಕಳೆದ ನಾಲ್ಕು ದಿನಗಳಿಂದ ಅರ್ಧ ಕರಗಿದ ಗಣೇಶನ ಮೂರ್ತಿ ಹಾಗೂ ತಾತ್ಕಾಲಿಕ ಟ್ಯಾಂಕಿನ ಅವಶೇಷಗಳನ್ನು ತಂದು ರಸ್ತೆ ಪಕ್ಕದಲ್ಲಿ ಇಡಲಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ತಕ್ಷಣವೇ ಇದನ್ನು ಇಲ್ಲಿಂದ ತೆರವುಗೊಳಿಸಬೇಕಾಗಿ ವಿನಂತಿ.