ಆಗಸ್ಟ್ 21ರಂದು ಸಂಜೆ 6 ಗಂಟೆ ಸಮಯದಲ್ಲಿ ಹೊಸೂರ್ ರಸ್ತೆ ಸಿಗ್ನಲ್ನಲ್ಲಿ ಸುಮಾರು 5 ಗಂಟೆ ಟ್ರಾಫಿಕ್ ಜಾಮ್ ಆದ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ನಾರಾಯಣ ಆಸ್ಪತ್ರೆ, ಚಂದಾಪುರ ಹಾಗೂ ಇತರೆ ಬಡಾವಣೆಯ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದ ಕಾರಣ ಕೆಲವು ಬಿಎಂಟಿಸಿ ಬಸ್ಸುಗಳನ್ನು ಮೇಲುಸೇತುವೆ ಮುಖಾಂತರ ಚಂದಾಪುರದಿಂದ ಸೇಂಟ್ ಜಾನ್್ಸ ಆಸ್ಪತ್ರೆಯವರೆಗೆ ಪ್ರತಿ 15 ನಿಮಿಷಕ್ಕೆ ಒಂದರಂತೆ ಹೊರಡಿಸಿದಲ್ಲಿ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಬಹುದು. ದಯಮಾಡಿ ಬಿಎಂಟಿಸಿ ಅಧಿಕಾರಿಗಳು ಈ ಸಲಹೆಯ ಬಗ್ಗೆ ಸ್ಪಂದಿಸಿ, ಮೇಲುಸೇತುವೆ ಮುಖಾಂತರ ಪ್ರಯಾಣಿಸುವ ಭಾಗ್ಯವನ್ನು ಅತಿ ಶೀಘ್ರವಾಗಿ ಕಲ್ಪಿಸಲಿ.