ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಗಳಲ್ಲಿ ಸಂಸದರಿಗೆ, ಶಾಸಕರಿಗೆಂದು ಮೂರು ಆಸನಗಳನ್ನು ಕಾಯ್ದಿರಿಸಿರುತ್ತಾರೆ. ಹಿಂಬಾಲಕರ ಕಾರಿನಲ್ಲೊ ಹೆಲಿಕಾಪ್ಟರಿನಲ್ಲೊ ಓಡಾಡುವ ಜನಪ್ರತಿನಿಧಿಗಳಿಗೆ ಬಸ್ನಲ್ಲಿ ಆಸನ ಮೀಸಲಾತಿ ಒಂದು ಪ್ರಹಸನವಷ್ಟೆ.
ಓಬೀರಾಯನ ಕಾಲದಲ್ಲಿ ಮಾಡಿದ್ದ ಈ ಮೀಸಲಾತಿಯನ್ನು ಸಂಸದ, ಶಾಸಕರೇ ಖುದ್ದು ಮುಂದೆ ಬಂದು ತೆಗೆಸಲಿ. ಇಲ್ಲವಾದಲ್ಲಿ ಅದು ನಗೆಪಾಟಲಿಗೀಡಾಗುತ್ತದೆ.