ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಸರ್ಪಗಳು !

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಹಾವು ಕಡಿತದಿಂದ (ವರ್ಷಕ್ಕೆ) 50 ಸಾವಿರ ಮಂದಿ ಸಾವು' (ಪ್ರ. ವಾ.  ಡಿ. 12)
ಈ ಕಾಲದಲ್ಲೂ ಹಾವುಗಳಿಂದ ಇಷ್ಟೊಂದು ಸಾವುಗಳೆ? ಅದಂತಿರಲಿ. ಲೆಕ್ಕವಿಲ್ಲದಷ್ಟು ಮಾನವ ಸರ್ಪಗಳ ವಿಷಕ್ಕೆ ಅಸಂಖ್ಯ ಮಂದಿ ಯಾವಾಗಲೂ ಬಲಿಯಾಗುತ್ತಾರೆ! ಹಾವುಗಳು ಅಪಾಯ ಸಂದರ್ಭದಲ್ಲಿ ಮಾತ್ರ ಕಚ್ಚುತ್ತವೆ; ಆದರೆ ಸುಮ್ಮ ಸುಮ್ಮನೇ ಕಚ್ಚುವುದು ಹಲವರ ಸ್ವಭಾವ. ಅಲ್ಲದೆ, ಎಷ್ಟೋ ಮಾನವ ಸರ್ಪಗಳಿಗೆ ಒಂದು ವೇಳೆ ವಿಷವಿಲ್ಲದಿದ್ದರೂ, ಎರಡು ನಾಲಗೆ ಇದ್ದೇ ಇರುತ್ತವೆ!

ದೇವರ ದಾಸಿಮಯ್ಯನ ಈ ಉಕ್ತಿಯೂ ಸ್ಮರಣೀಯ: `ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದರೆ, ವಿಷವೇರಿತ್ತಯ್ಯ ಅಪಾದ ಮಸ್ತಕಕ್ಕೆ ....' ಈಗ ದೇಶದ ಬಹುಭಾಗ ಹಸಿವಿನ ಹೆಬ್ಬಾವಿಗೆ ಗ್ರಾಸವಾಗಿದೆ! (ವಿಷಕಂಠನೆ ಕಾಪಾಡಬೇಕು).
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT