ವಿದ್ಯುತ್ ಸಮಸ್ಯೆ ನೀಗಿಸಲು ಲೋಡ್ ಶೆಡ್ಡಿಂಗ್ ಅನಿವಾರ್ಯ. ಆದರೆ ಮನಸ್ಸಿಗೆ ಬಂದ ಹಾಗೆ ವಿದ್ಯುತ್ ಕಡಿತಗೊಳಿಸುವುದು ಯಾವ ನ್ಯಾಯ? ಪತ್ರಿಕೆಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ತಲಾ ಒಂದೊಂದು ಗಂಟೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಬೇಕಾಬಿಟ್ಟಿಯಾಗಿ ಕಡಿತ ಮಾಡಲಾಗುತ್ತಿದೆ.
ಬೆಳಿಗ್ಗೆ ಶಾಲೆಗೆ, ಕಚೇರಿಗೆ ಹೋಗುವ ಅವಸರದಲ್ಲಿರುವಾಗ ಒಂದೊಂದು ದಿನ ಒಂದೊಂದು ವೇಳೆ ಕರೆಂಟ್ ಹೋಗುತ್ತಿದೆ. ಈ ರೀತಿ ಮನಸ್ಸಿಗೆ ಬಂದಂತೆ ವರ್ತಿಸಿ ಸರ್ಕಾರ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ? ಬಿಬಿಎಂಪಿ ಚುನಾವಣೆಯಲ್ಲಿ ಅರ್ಧಕ್ಕಿಂತ ಕಡಿಮೆ ಮತದಾನ ಮಾಡಿರುವ ಮತದಾರರನ್ನೋ ಅಥವಾ ಪತ್ರಿಕೆ ಓದುಗರನ್ನೋ?