ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳಲಿ

Last Updated 10 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ವಿದ್ಯುತ್‌ ಸಮಸ್ಯೆ ನೀಗಿಸಲು ಲೋಡ್‌ ಶೆಡ್ಡಿಂಗ್‌ ಅನಿವಾರ್ಯ. ಆದರೆ ಮನಸ್ಸಿಗೆ ಬಂದ ಹಾಗೆ ವಿದ್ಯುತ್‌ ಕಡಿತಗೊಳಿಸುವುದು ಯಾವ ನ್ಯಾಯ? ಪತ್ರಿಕೆಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ತಲಾ ಒಂದೊಂದು ಗಂಟೆ ವಿದ್ಯುತ್‌ ಕಡಿತಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಬೇಕಾಬಿಟ್ಟಿಯಾಗಿ ಕಡಿತ ಮಾಡಲಾಗುತ್ತಿದೆ.

ಬೆಳಿಗ್ಗೆ ಶಾಲೆಗೆ, ಕಚೇರಿಗೆ ಹೋಗುವ ಅವಸರದಲ್ಲಿರುವಾಗ ಒಂದೊಂದು ದಿನ ಒಂದೊಂದು ವೇಳೆ ಕರೆಂಟ್‌ ಹೋಗುತ್ತಿದೆ. ಈ ರೀತಿ ಮನಸ್ಸಿಗೆ ಬಂದಂತೆ ವರ್ತಿಸಿ ಸರ್ಕಾರ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ? ಬಿಬಿಎಂಪಿ ಚುನಾವಣೆಯಲ್ಲಿ ಅರ್ಧಕ್ಕಿಂತ ಕಡಿಮೆ ಮತದಾನ ಮಾಡಿರುವ ಮತದಾರರನ್ನೋ ಅಥವಾ ಪತ್ರಿಕೆ ಓದುಗರನ್ನೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT