ನಮ್ಮ ಸರ್ಕಾರಗಳು ರೈತ ಸತ್ತ ನಂತರ ಪರಿಹಾರ ನೀಡುವ ಬದಲು, ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ನಿಗದಿಪಡಿಸಬೇಕು. ಆಗ ಯಾವ ರೈತನೂ ಸಾಲ ಮನ್ನಾ, ಸಹಾಯಧನ ಕೇಳುವುದಿಲ್ಲ. ಆದರೆ ಸರ್ಕಾರದ ಕೆಟ್ಟ ನೀತಿಗಳಿಂದ ರೈತನ ಸ್ವಾಭಿಮಾನವೇ ಉಡುಗಿ ಹೋಗಿ ಜಗತ್ತಿಗೆ ‘ನೀಡುವ ಕೈ’ ಆಗಿದ್ದ ರೈತ ‘ಬೇಡುವ ಕೈ’ ಆಗಿರುವುದು ವಿಪರ್ಯಾಸ.
ರೈತನ ಮಗನೆಂದು ಹೇಳಿ ಅಧಿಕಾರ ಸ್ವೀಕರಿಸಿ ರೈತನ ಆತ್ಮವಿಶ್ವಾಸವನ್ನು ಉಡುಗಿಸುವಲ್ಲಿ ಈ ರಾಜಕಾರಣಿಗಳಿಗಿರುವ ಖುಷಿ ಏನೆಂಬುದೇ ತಿಳಿಯದು.
ಸರ್ಕಾರ ಕೊಟ್ಟ ಮಾತಿನಂತೆ ಇನ್ನಾದರೂ ನಡೆದುಕೊಳ್ಳಬೇಕು.