ನಾಡಕಚೇರಿಗಳಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳಿಗಾಗಿ ಬರುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಹಳಷ್ಟು ಕಡೆ ಕಚೇರಿಯಲ್ಲಿ ಒಬ್ಬರೇ ಕೆಲಸ ನಿಭಾಯಿಸಬೇಕಾದ ಪರಿಸ್ಥಿತಿ ಇದೆ.
ಇದರಿಂದಾಗಿ ಜನಸಾಮಾನ್ಯರು ಬಹಳ ಹೊತ್ತು ನಾಡ ಕಚೇರಿಯಲ್ಲಿ ಕಾಯಬೇಕಾಗುತ್ತದೆ. ಇಂಥ ಕೇಂದ್ರಗಳಲ್ಲಿ ನೌಕರರ ಸಂಖ್ಯೆಯನ್ನು ಹೆಚ್ಚಿಸಿದರೆ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು.
ಅಂತರ್ಜಾಲದ ಸರ್ವರ್ ಸಂಪರ್ಕ ಮತ್ತೆ ಮತ್ತೆ ಕಡಿತಗೊಳ್ಳುವುದು ಕೂಡ ನಿಧಾನಗತಿಯ ಸೇವೆಗೆ ಕಾರಣವಾಗಿದೆ. ಸಂಬಂಧಪಟ್ಟವರು ಇಂತಹ ನ್ಯೂನತೆಗಳನ್ನು ಸರಿಪಡಿಸಿ ಜನರಿಗೆ ತ್ವರಿತ ಸೇವೆ ಒದಗಿಸಬೇಕಿದೆ. -ನಾಗರಾಜ್ ಬಿ.ಅರ್., ಸಾದರಹಳ್ಳಿ