‘ವಿರೋಧ ಪಕ್ಷದವರು ರಾಮನ ಜಪ ಮಾಡಿ ಮಾಡಿ ಸುಸ್ತಾದರು. ಸ್ವಲ್ಪ ದಿವಸ ಅಯ್ಯಪ್ಪನಿಗೂ ಶರಣೆಂದರು. ಅವರು ಹೀಗೆ ಸಮಯ, ಸಂದರ್ಭ ನೋಡಿ ಭಾವನೆಗಳ ಜತೆ ಆಟ ಆಡ್ತಾರೆ. ನಾನು ಯಾವಾಗಲೂ ಭಾವನಾತ್ಮಕವಾಗೇ ಇರ್ತೀನಿ. ಅದಕ್ಕೇ ನನಗೆ ಕಣ್ಣೀರು ಯಾವಾಗ ಬೇಕಾದರೂ ಬರ್ತಾನೇ ಇರುತ್ತೆ. ನಾನು ಎಲ್ಲ ಸಂದರ್ಭಗಳಲ್ಲೂ ದೇವರನ್ನು ನೆನೆಸ್ಕೋತೀನಿ. ಚುನಾವಣೆ ಸಂದರ್ಭವಿರಲಿ, ಬರಗಾಲ–ಮಳೆಗಾಲವೇ ಆಗಿರಲಿ, ಉಗ್ರರ ದಾಳಿಯೇ ಇರಲಿ.ದೇವರು ಎಲ್ಲರಿಗೂ ಬೇಕು ತಾನೇ? ನಮ್ಮಂಥ ರಾಜಕಾರಣಿಗಳಿಂದ ಸಾಧ್ಯವಾಗದೇ ಇರೋ ಕೆಲಸ- ಕಾರ್ಯಗಳು ದೇವಸ್ಥಾನಗಳ ಭೇಟಿಯಿಂದ ಸಾಧ್ಯವಾಗುತ್ತವೆ. ಅದಕ್ಕೇ ನಾನು ಟೆಂಪಲ್ ವಿಸಿಟ್ ಮಾತ್ರ ನಿಲ್ಲಿಸೋಲ್ಲ, ಏನಂತೀರಿ?’