<p><strong>ದಾವಣಗೆರೆ: </strong>‘ಸರ್ಕಾರಿ ಅಧಿಕಾರಿಗಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತಗೊಳ್ಳುವುದಕ್ಕೆ ಚುನಾವಣೆಗಳೇ ಬರಬೇಕೆನೋ’ ಎಂದು ದಾವಣಗೆರೆಯ ಜನರು ಆಡಿಕೊಳ್ಳುವಂತಾಗಿದೆ.</p>.<p>ವಿಧಾನಸಭಾ ಚುನಾವಣೆಗೆ ಈಗ ನಾಮಪತ್ರ ಸಲ್ಲಿಕೆಯ ಕಾಲ. ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಗಳನ್ನು ಪಾಲಿಕೆಯಲ್ಲೇ ಸ್ಥಾಪಿಸಲಾಗಿದೆ.</p>.<p>ಪಾಲಿಕೆ, ಪ್ರತಿನಿತ್ಯ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಎಡತಾಕುವ ಸ್ಥಳ. ಆದರೆ ಈಗ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವಾಹನಗಳನ್ನು ಆವರಣದಲ್ಲಿ ತರುವಂತಿಲ್ಲ. ನೀರು ಬಂದಿಲ್ಲ; ಕಂದಾಯ ಕಟ್ಟಬೇಕು ಎಂದು ಹತ್ತಾರು ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರನ್ನೂ ಪೊಲೀಸರು ತಡೆದು ತಪಾಸಣೆ ಮಾಡುತ್ತಿದ್ದಾರೆ. ಇದಕ್ಕೆ ತಕರಾರು ತೆಗೆದವರನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಹೊರದಬ್ಬುತ್ತಾರೆ. ಆದರೆ, ನಾಮಪತ್ರ ಸಲ್ಲಿಸಲು ಬರುವ ರಾಜಕಾರಣಿಗಳನ್ನು ಮಾತ್ರ ಹಲ್ಲು ಕಿರಿದು ಸ್ವಾಗತಿಸುತ್ತಾರೆ. ಪೊಲೀಸರ ಈ ‘ಕರ್ತವ್ಯ ಪ್ರಜ್ಞೆ’ಯಿಂದ ನಾಗರಿಕರು ಹೈರಾಣಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>‘ಸರ್ಕಾರಿ ಅಧಿಕಾರಿಗಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತಗೊಳ್ಳುವುದಕ್ಕೆ ಚುನಾವಣೆಗಳೇ ಬರಬೇಕೆನೋ’ ಎಂದು ದಾವಣಗೆರೆಯ ಜನರು ಆಡಿಕೊಳ್ಳುವಂತಾಗಿದೆ.</p>.<p>ವಿಧಾನಸಭಾ ಚುನಾವಣೆಗೆ ಈಗ ನಾಮಪತ್ರ ಸಲ್ಲಿಕೆಯ ಕಾಲ. ದಾವಣಗೆರೆಯ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಗಳನ್ನು ಪಾಲಿಕೆಯಲ್ಲೇ ಸ್ಥಾಪಿಸಲಾಗಿದೆ.</p>.<p>ಪಾಲಿಕೆ, ಪ್ರತಿನಿತ್ಯ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಎಡತಾಕುವ ಸ್ಥಳ. ಆದರೆ ಈಗ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವಾಹನಗಳನ್ನು ಆವರಣದಲ್ಲಿ ತರುವಂತಿಲ್ಲ. ನೀರು ಬಂದಿಲ್ಲ; ಕಂದಾಯ ಕಟ್ಟಬೇಕು ಎಂದು ಹತ್ತಾರು ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರನ್ನೂ ಪೊಲೀಸರು ತಡೆದು ತಪಾಸಣೆ ಮಾಡುತ್ತಿದ್ದಾರೆ. ಇದಕ್ಕೆ ತಕರಾರು ತೆಗೆದವರನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಹೊರದಬ್ಬುತ್ತಾರೆ. ಆದರೆ, ನಾಮಪತ್ರ ಸಲ್ಲಿಸಲು ಬರುವ ರಾಜಕಾರಣಿಗಳನ್ನು ಮಾತ್ರ ಹಲ್ಲು ಕಿರಿದು ಸ್ವಾಗತಿಸುತ್ತಾರೆ. ಪೊಲೀಸರ ಈ ‘ಕರ್ತವ್ಯ ಪ್ರಜ್ಞೆ’ಯಿಂದ ನಾಗರಿಕರು ಹೈರಾಣಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>