ಆ ವೇಳೆ ಚಹಾ ಅಂಗಡಿಯೊಂದರ ಮುಂದೆ ನಿಂತಿದ್ದ ತಾಯಿ, ಮಗಳು ಮತ್ತು ಅಲ್ಲೇ ಇದ್ದ ಆರು ಹುಡುಗರು ಬಿಯರ್ ಪ್ರವಾಹಕ್ಕೆ ಸಿಲುಕಿದರು. ಅವರ ಪೈಕಿ ಮೂವರು ಮೃತಪಟ್ಟರು. ಮೃತರ ಸಂಬಂಧಿಕರು ನ್ಯಾಯ ಒದಗಿಸಿಕೊಡುವಂತೆ ನ್ಯಾಯಲಯಕ್ಕೆ ಮೊರೆ ಇಟ್ಟರು. 'ಇದು ಮನುಷ್ಯರ ಕೃತ್ಯ ಅಲ್ಲ, ದೈವ ನಿರ್ಣಯ' ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತು.