ಮುಖಂಡನ ಮಾತಿನಿಂದ ಮಂದಸ್ಮಿತರಾಗಿ ಮನದಲ್ಲೇ ಹಿರಿ ಹಿರಿ ಹಿಗ್ಗಿದ್ದ ಜಿಗಜಿಣಗಿ, ಮಾತನಾಡುವ ವೇಳೆ, ನೆರೆದಿದ್ದ ಜನಸಮೂಹವನ್ನುದ್ದೇಶಿಸಿ, ‘ನೀವೆಲ್ಲ ನಮ್ಮ ವಿಜುಗೌಡ ಪಾಟೀಲಣ್ಣಂಗೆ ಆಶೀರ್ವದಿಸಿ, ಆತನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ’ ಎಂದು ಮನವಿ ಮಾಡುತ್ತಿದ್ದಂತೆ, ಜನಸಮೂಹದಲ್ಲಿ ನಶೆಯಲ್ಲಿದ್ದ ‘ಪರಮಾತ್ಮ’ನೊಬ್ಬನು, ‘ಯಪ್ಪಾ ನೀ ಹೊಂದಾಣ್ಕೆ ಮಾಡ್ಕೊಬ್ಯಾಡ್ವೋ. ಮೊದಲು ನೀ ಆಶೀರ್ವಾದ ಮಾಡಪ್ಪೋ’ ಎಂಬ ಉದ್ಗಾರ ತೆಗೆದ. ಇದನ್ನು ಕೇಳಿ ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಿತು.