ದಾವಣಗೆರೆ: ದಾವಣಗೆರೆ ಕ್ರೀಡಾ ನಿಲಯದ ಕುಸ್ತಿಪಟುಗಳಾದ ಶರತ್ ಎಸ್.ಎನ್. ಮತ್ತು ಬಿ. ಸಂಜೀವ ಅವರು ನವದೆಹಲಿಯಲ್ಲಿ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಷನ್ (ಎಸ್ಜಿಎಫ್ಐ) ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಕುಸ್ತಿ ಸ್ಪರ್ಧೆಗಳ 14 ವರ್ಷದೊಳಗಿನವರ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.