‘ತಂಡದಲ್ಲಿ ಯಶಸ್ಸಿನ ‘ಸಂಸ್ಕೃತಿ’ಯನ್ನು ಬೆಳೆಸಲು ಆಡಳಿತ ತುಂಬ ಶ್ರಮ ವಹಿಸಿದೆ. ತಂಡದಲ್ಲಿ ಎಲ್ಲರೂ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಇದರಿಂದ ಪಂದ್ಯಗಳಲ್ಲಿ ತಂತ್ರಗಳನ್ನು ಹೂಡುವ ಸಂದರ್ಭದಲ್ಲಿ ಎದುರಾಳಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಈ ಅಂಶ ಟೂರ್ನಿಯುದ್ದಕ್ಕೂ ತಂಡಕ್ಕೆ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು.