<p><strong>ಮುಂಬೈ:</strong> ಆಟಗಾರರ ಪ್ರಯಾಣವು ಸುರಕ್ಷಿತವಾಗಿರುವ ಕುರಿತು ಸಂಪೂರ್ಣ ಭರವಸೆ ಮೂಡುವವರೆಗೂ ದೇಶಿ ಟೂರ್ನಿಗಳನ್ನು ಆಯೋಜಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.</p>.<p>ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳಿಗೆ ತಂಡಗಳು ಅಂತರರಾಜ್ಯ ಪ್ರಯಾಣ ಮಾಡಬೇಕು. ಆದರೆ ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಉಪಟಳ ಕಡಿಮೆಯಾಗಿಲ್ಲ. ಆದ್ದರಿಂದ ಪ್ರಯಾಣಕ್ಕೆ ಕೆಲವು ರಾಜ್ಯಗಳಲ್ಲಿ ನಿರ್ಬಂಧವೂ ಇದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ’ದೇಶಿ ಟೂರ್ನಿಗಳನ್ನು ಆಯೋಜಿಸುವುದು ಮಹತ್ವದ ವಿಷಯ. ಆದರೆ, ಕೊರೊನಾ ವೈರಸ್ ಸಂಪೂರ್ಣ ಹತೋಟಿಗೆ ಬಂದ ಮೇಲಷ್ಟೇ ಟೂರ್ನಿಗಳ ಆಯೋಜನೆ ಕುರಿತು ಯೋಚಿಸಬಹುದು‘ ಎಂದು ಸ್ಪೋರ್ಟ್ಸ್ ಟಾಕ್ನಲ್ಲಿ ಗಂಗೂಲಿ ಹೇಳಿದ್ದಾರೆ.</p>.<p>’ಭಾರತ ಬಹಳ ವಿಶಾಲವಾದ ದೇಶ. ದೇಶಿ ಟೂರ್ನಿ ನಡೆದರೆ ರಾಜ್ಯ ತಂಡಗಳು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳ ವಾತಾವರಣ ವಿಭಿನ್ನವಾಗಿಯೇ ಇರುತ್ತದೆ. ಅಲ್ಲದೇ ಈ ಕೊರೊನಾ ಕಾಲದಲ್ಲಿ ಪ್ರಯಾಣ ಸರಿಯಲ್ಲ. ಆಟಗಾರರ ಸುರಕ್ಷತೆಗೆ ನಮ್ಮ ಆದ್ಯತೆ‘ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಬುಧವಾರ 48ನೇ ಜನ್ಮದಿನ ಆಚರಿಸಿಕೊಂಡ ಗಂಗೂಲಿ, ’ಭಾರತದಲ್ಲಿಯೇ ಐಪಿಎಲ್ ಆಯೋಜನೆಗೆ ಆದ್ಯತೆ ಕೊಡಲಾಗುವುದು. ವಿದೇಶದಲ್ಲಿ ಆಯೋಜಿಸುವ ವಿಚಾರಕ್ಕೆ ಎರಡನೇ ಆದ್ಯತೆ‘ ಎಂದಿದ್ದರು. ಅಲ್ಲದೇ ಈ ವರ್ಷ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾ ಕಪ್ ಟೂರ್ನಿ ಕೂಡ ರದ್ದಾಗಿದೆ ಎಂದೂ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಆಟಗಾರರ ಪ್ರಯಾಣವು ಸುರಕ್ಷಿತವಾಗಿರುವ ಕುರಿತು ಸಂಪೂರ್ಣ ಭರವಸೆ ಮೂಡುವವರೆಗೂ ದೇಶಿ ಟೂರ್ನಿಗಳನ್ನು ಆಯೋಜಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.</p>.<p>ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ದುಲೀಪ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳಿಗೆ ತಂಡಗಳು ಅಂತರರಾಜ್ಯ ಪ್ರಯಾಣ ಮಾಡಬೇಕು. ಆದರೆ ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಉಪಟಳ ಕಡಿಮೆಯಾಗಿಲ್ಲ. ಆದ್ದರಿಂದ ಪ್ರಯಾಣಕ್ಕೆ ಕೆಲವು ರಾಜ್ಯಗಳಲ್ಲಿ ನಿರ್ಬಂಧವೂ ಇದೆ.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ’ದೇಶಿ ಟೂರ್ನಿಗಳನ್ನು ಆಯೋಜಿಸುವುದು ಮಹತ್ವದ ವಿಷಯ. ಆದರೆ, ಕೊರೊನಾ ವೈರಸ್ ಸಂಪೂರ್ಣ ಹತೋಟಿಗೆ ಬಂದ ಮೇಲಷ್ಟೇ ಟೂರ್ನಿಗಳ ಆಯೋಜನೆ ಕುರಿತು ಯೋಚಿಸಬಹುದು‘ ಎಂದು ಸ್ಪೋರ್ಟ್ಸ್ ಟಾಕ್ನಲ್ಲಿ ಗಂಗೂಲಿ ಹೇಳಿದ್ದಾರೆ.</p>.<p>’ಭಾರತ ಬಹಳ ವಿಶಾಲವಾದ ದೇಶ. ದೇಶಿ ಟೂರ್ನಿ ನಡೆದರೆ ರಾಜ್ಯ ತಂಡಗಳು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳ ವಾತಾವರಣ ವಿಭಿನ್ನವಾಗಿಯೇ ಇರುತ್ತದೆ. ಅಲ್ಲದೇ ಈ ಕೊರೊನಾ ಕಾಲದಲ್ಲಿ ಪ್ರಯಾಣ ಸರಿಯಲ್ಲ. ಆಟಗಾರರ ಸುರಕ್ಷತೆಗೆ ನಮ್ಮ ಆದ್ಯತೆ‘ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಬುಧವಾರ 48ನೇ ಜನ್ಮದಿನ ಆಚರಿಸಿಕೊಂಡ ಗಂಗೂಲಿ, ’ಭಾರತದಲ್ಲಿಯೇ ಐಪಿಎಲ್ ಆಯೋಜನೆಗೆ ಆದ್ಯತೆ ಕೊಡಲಾಗುವುದು. ವಿದೇಶದಲ್ಲಿ ಆಯೋಜಿಸುವ ವಿಚಾರಕ್ಕೆ ಎರಡನೇ ಆದ್ಯತೆ‘ ಎಂದಿದ್ದರು. ಅಲ್ಲದೇ ಈ ವರ್ಷ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಏಷ್ಯಾ ಕಪ್ ಟೂರ್ನಿ ಕೂಡ ರದ್ದಾಗಿದೆ ಎಂದೂ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>