ಮೊದಲ ಎರಡು ಪಂದ್ಯದಲ್ಲಿ ಸೋತಿದ್ದ ಸಿಂಹಳೀಯರು ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಶಾನ್ ಪ್ರಿಯಾಂಜನ್ ನಾಯಕತ್ವದ ತಂಡವು ಸರಣಿಯನ್ನು ಕೊನೆಯ ವರೆಗೂ ಜೀವಂತವಾಗಿಟ್ಟುಕೊಳ್ಳಲು ತಂತ್ರರೂಪಿಸಿದೆ. ಲಂಕನ್ನರು ಅಭ್ಯಾಸಕ್ಕಾಗಿ ಬುಧವಾರ ಮಧ್ಯಾಹ್ನ ಕ್ರೀಡಾಂಗಣಕ್ಕೆ ಬಂದರಾದರೂ ಮಳೆಯಿಂದ ಸಾಧ್ಯವಾಗಲಿಲ್ಲ.